ಮುಕ್ತಾಯ ಮಾಡು

    ಇತಿಹಾಸ

    ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ನೋಟಿಫಿಕೇಷನ್ ನಂ. ಎಸ್‌.ಡಿ. 2004 ಸಿಇಟಿ 64, ಬೆಂಗಳೂರು ದಿನಾಂಕ 25-08-1964 ರಂತೆ ಅಕ್ಟೋಬರ 1, 1964ರಲ್ಲಿ ಕಾರ್ಯಾರಂಭಗೊಂಡಿದೆ. ದಿ. 02-08-1965ರಂದು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಶ್ರೀ ಎನ್. ನಿಜಲಿಂಗಪ್ಪರವರು, ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ಖ್ಯ ನ್ಯಾಯಮೂರ್ತಿ ಎಚ್. ಹೊಂಬೆಗೌಡರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಡಿಗಲನ್ನು ಹಾಕಿದರು. ಚಿತ್ರದುರ್ಗ ಜಿಲ್ಲಾ ನ್ಯಾಯಾಂಗ ಕಟ್ಟಡವನ್ನು ಮೈಸೂರಿನ ಮುಖ್ಯನ್ಯಾಯಮೂರ್ತಿಗಳಾದ ಗೌರವಾನ್ವಿತ ಸೋಮನಾಥ ಅಯ್ಯರ ಅವರು, ಎ.ಐ.ಸಿ.ಸಿ. ಅಧ್ಯಕ್ಷರಾದ ಎಸ್. ನಿಜಲಿಂಗಪ್ಪರವರ ಅಧ್ಯಕ್ಷತೆಯಲ್ಲಿ ದಿ. 07-12-1969 ರಂದು ಉದ್ಘಾಟಿಸಿದರು. ಜಿಲ್ಲೆಯಲ್ಲಿ ಆರು ತಾಲೂಕುಗಳು ಇದ್ದು, ಅವು ಹಿರಿಯೂರು, ಹೊಸದುರ್ಗ, ಮೊಳಕಾಲ್ಮೂರು, ಹೊಳಲ್ಕೆರೆ, ಚಳ್ಳಕೆರೆ ಆಗಿರುತ್ತವೆ. .